ಎಸ್.ಡಿ.ಎಂ. ಕಾಲೇಜ್‌ ಆಫ್‌ ಬಿಸ್‌ನೆಸ್‌ ಮ್ಯಾನೇಜ್‌ಮೆಂಟ್‌: ಕರ್ನಾಟಕ ರಾಜ್ಯೋತ್ಸವದ ಸಂಭ್ರಮಾಚರಣೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್‌ ಆಫ್‌ ಬಿಸ್‌ನೆಸ್‌ ಮ್ಯಾನೇಜ್‌ಮೆಂಟ್‌ನ ʼಕನ್ನಡ ಸಂಘ ‘ವಿಕಸನʼ ಇದರ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಸಂಭ್ರಮಾಚರಣೆಯನ್ನು ಕಾಲೇಜಿನ ಆವರಣದಲ್ಲಿ ಇಂದು ಹಮ್ಮಿಕೊಳ್ಳಲಾಯಿತು.

ಮುಖ್ಯ ಅತಿಥಿ, ಕರ್ನಾಟಕ ಯಕ್ಷಧಾಮ ಇದರ ಅಧ್ಯಕ್ಷ, ಹಿರಿಯ ಕಲಾ ಸಾಹಿತಿ ಎಚ್.‌ ಜನಾರ್ದನ ಹಂದೆ ಕೋಟ ಅವರು ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. 

ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕನ್ನಡ ನಾಡು, ನುಡಿ, ಸಂಸ್ಕೃತಿಯ ಮಹತ್ವವನ್ನು ಮನವರಿಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.  

ವಿದ್ಯಾರ್ಥಿಗಳಿಂದ ಕೋಟಿ ಕಂಠ ಗಾಯನ ನೆರವೇರಿತು.

ಕಾಲೇಜಿನ ಪ್ರಾಂಶುಪಾಲೆ ಪ್ರೊ. ಅರುಣಾ ಪಿ. ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ‘ವಿಕಸನ’ ಸಂಘದ ಸಂಯೋಜಕರಾದ ರೇಣುತಾಕ್ಷಿ ಮತ್ತು ಜೀವಿತಾ ಡಿ., ವಿದ್ಯಾರ್ಥಿ ಸಂಯೋಜಕರಾದ ಅರ್ಚಿತ್‌ ಎ. ಜೈನ್‌ ಸಂಸೆ ಮತ್ತು ವಿನಿಷಾ ವಿಜಯ್‌ ಹಾಗೂ ಎಲ್ಲಾ ತರಗತಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ದಿಶಾ ಕಾರ್ಯಕ್ರಮ ನಿರ್ವಹಿಸಿದರು.